ಸದಾ ಮಳೆಗಾಲ ಸಂದರ್ಭ ರಸ್ತೆಗಳು ಜಲಾವೃತ ದಿಂದ ಸುದ್ದಿಯಾಗುತ್ತಿದ್ದ ಶ್ರೀ ಕ್ಷೇತ್ರ ಭಾಗಮಂಡಲ ಇದೀಗ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮೂಲಕ ಗಮನ ಸೆಳೆದಿದೆ.

ಇಲ್ಲಿನ ಬಳ್ಳಡ್ಕ ಮತ್ತು ಅಪ್ಪಾಜಿ ಹಾಗೂ ಮನು ರವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಯುವ ಸಬಲೀಕರಣ ಇಲಾಖೆ, ನೆಹರೂ ಯುವ ಕೇಂದ್ರ,ಕೊಡಗು ಜಿಲ್ಲಾ ವಿವಿಧ ತಾಲ್ಲೂಕು ಗಳ ಯುವ ಒಕ್ಕೂಟ,ಭಾಗಮಂಡಲದ ಶ್ರೀ ಕೃಷ್ಣ ಯುವಕ ಸಂಘದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ 33ನೇ ವರ್ಷದ ಕ್ರೀಡಾಕೂಟವನ್ನು ಮಾಜಿ ಶಾಸಕ ಕೆಜಿ ಬೋಪಯ್ಯ ಉದ್ಘಾಟಿಸಿದರು.ಅದ್ದೂರಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಹಿಳೆಯರು ಪುರುಷರಿಗೆ ಹಗ್ಗ ಜಗ್ಗಾಟ,ವಾಲಿಬಾಲ್, ಫುಟ್ಬಾಲ್, ಥ್ರೋ ಬಾಲ್ ನಲ್ಲಿ ತುಂತುರು ಮಳೆ ನಡುವೆ ಯುವ ಸಮೂಹ ಉತ್ಸಾಹದಿಂದ ಭಾಗವಿಸಿದರು, ಸ್ಪರ್ಧೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಸಂಸದ ಯದುವೀರ್ ಸಹ ಆಗಮಿಸಿ ಯುವ ಸಮೂಹಕ್ಕೆ ಪ್ರೋತ್ಸಹ ನೀಡಿದರು.